ಮತದಾನದ ಜಾಗೃತಿ ಕುರಿತು ವಿಶೇಷ ಚೇತನರಿಂದ ತ್ರಿ-ಚಕ್ರ ವಾಹನ ಜಾಥಾ

ಕಿತ್ತೂರು ವಿಜಯ 
ಚಿಕ್ಕೋಡಿ : ಜಿಲ್ಲಾಡಳಿತ ಬೆಳಗಾವಿ, ತಾಲೂಕಾ ಆಡಳಿತ ಚಿಕ್ಕೋಡಿ, ತಾಲೂಕಾ ಪಂಚಾಯತ, ತಾಲೂಕಾ ಸ್ವೀಪ್ ಸಮಿತಿ, ಚಿಕ್ಕೋಡಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ, ಪುರಸಭೆ ಚಿಕ್ಕೋಡಿ ಇವರ ಸಹಯೋಗದಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆ -2024 ರ ನಿಮಿತ್ಯ ಮತದಾನ ಜಾಗೃತಿಯ ಸ್ವೀಪ್ ಚಟುವಟಿಕೆಯ ಭಾಗವಾಗಿ ವಿಭಾಗ ಮಟ್ಟದ ವಿಶೇಷ ಚೇತನರ ತ್ರಿ-ಚಕ್ರ ವಾಹನ ಜಾಥಾ ತಾಲೂಕ ಪಂಚಾಯತ ಕಾರ್ಯಾಲಯದಿಂದ ಚಿಕ್ಕೋಡಿ ನಗರದಲ್ಲಿ ಸಂಚರಿಸಿ ಮತದಾನದ ಜಾಗೃತಿ ಮೂಡಿಸಲಾಯಿತು.

ಅದರ ಜೊತೆಗೆ ಬೀದಿ ನಾಟಕದ ಕಾರ್ಯಕ್ರಮಕ್ಕೆ ಚುನಾವಣಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರಾಹುಲ್ ಶಿಂಧೆ ರವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ಡಾ// ಕೃಷ್ಣರಾಜು, ಲೆಕ್ಕಾಧಿಕಾರಿಗಳಾದ ಗಂಗಾ ಹಿರೇಮಠ, ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜಗದೀಶ ಕಮ್ಮಾರ, ಪುರಸಭೆಯ ಮುಖ್ಯಾಧಿಕಾರಿ ಮಹಾಂತೇಶ ನಿಡವಣಿ, ಸಹಾಯಕ ನಿರ್ದೇಶಕರು(ಗ್ರಾಉ) ಶಿವಾನಂದ ಶಿರಗಾಂವೆ, ಡಿ.ಐ.ಇ.ಸಿ ಸಂಯೋಜಕರಾದ ಪ್ರಮೋದ ಗೋಡೆಕರ,ಎಸ್.ಬಿ.ಎಮ್ ಸಂಯೋಜಕರಾದ ಬಾಹುಬಲಿ ಮಳವಂಕಿ, ತಾ.ಪಂ. ಐ.ಇ.ಸಿ ಸಂಯೋಜಕ ರಂಜಿತ ಕಾರ್ಣಿಕ, ತಾಲೂಕಾ ಪಂಚಾಯತ ಸಿಬ್ಬಂದಿಗಳು ಉಪಸ್ಥಿತರಿದ್ದರು.

Post a Comment

Previous Post Next Post
ಸುದ್ದಿ ಮತ್ತು ಜಾಹಿರಾತುಗಾಗಿ‌ ಸಂಪರ್ಕಿಸಿ : (ಮಾಹಾಂತೇಶ್ ಕರಬಸನ್ನವರ) : 9844101425